ಶಾಂತವೇರಿ ಗೋಪಾಲಗೌಡ ಅವರು ನಿಧನರಾಗಿ ಅರ್ಧ ಶತಮಾನ ಗತಿಸಿರುವುದು ‘50 ವರ್ಷಗಳ ಹಿಂದೆ’ (ಪ್ರ.ವಾ., ಜೂನ್ 9) ಅಂಕಣದಲ್ಲಿ ಪ್ರಕಟವಾಗಿದೆ. ಮಹಾನ್ ಮಾನವತಾವಾದಿ ಮತ್ತು ಚಿಂತಕ ರಾಮಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡವರು ಗೋಪಾಲಗೌಡರು. ಜೆ.ಎಚ್.ಪಟೇಲ್, ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂಥ ದಿಗ್ಗಜರನ್ನು ಬೆಳಕಿಗೆ ತಂದ ಕೀರ್ತಿ ಅವರದು.